ಬಸವಣ್ಣ   
  ವಚನ - 216     
 
ಧನಕ್ಕೆ ಮನವನೊಡ್ಡಿದರೇನು? ಮನಕ್ಕೆ ಧನವನೊಡ್ಡಿದರೇನು? ತನು, ಮನ, ಧನವ ಮೀರಿ ಮಾತಾಡಬಲ್ಲರೆ ಆತ ನಿಸ್ಸೀಮನು; ಆತ ನಿಜೈಕ್ಯನು. ತನು, ಮನ, ಧನವನುವಾದರೆ ಕೂಡಲಸಂಗಮದೇವನೊಲಿವ.