ಬಸವಣ್ಣ   
  ವಚನ - 224     
 
ಬಲಿಯ ಭೂಮಿ, ಕರ್ಣನ ಕವಚ, ಖಚರನ ಅಸ್ಥಿ, ಶಿಬಿಯ ಮಾಂಸ ವೃಥಾ ಹೋಯಿತ್ತಲ್ಲಾ! 'ಶಿವಭಕ್ತಿಮತಿಕ್ರಮ್ಯ ಯದ್ ದಾನಂಚ ವಿಧೀಯತೇ! ನಿಷ್ಫಲಂತು ಭವೇದ್ ದಾನಂ ರೌರವಂ ನರಕಂ ವ್ರಜೇತ್' ಇಂತೆಂದುದಾಗಿ, ಕೂಡಲಸಂಗನ ಶರಣರನರಿಯದೆ ಕೀರ್ತಿವಾರ್ತೆಗೆ ಮಾಡಿದವನ ಧನವು ವೃಥಾ ಹೋಯಿತ್ತಲ್ಲಾ!