ಬಸವಣ್ಣ   
  ವಚನ - 226     
 
ಅನವರತ ಮಾಡಿಹೆನೆಂದು ಉಪ್ಪರ-ಗುಡಿಯ ಕಟ್ಟಿ ಮಾಡುವ ಭಕ್ತನ ಮನೆಯದು ಅಂದಣಗಿತ್ತಿಯ ಮನೆ. ಸರ್ವಜೀವದಯಾಪಾರಿಯೆಂದು ಭೂತದಯಕಿಕ್ಕುವವನ ಮನೆ ಸಯಿಧಾನದ ಕೇಡು! ಸೂಳೆಯ ಮಗ ಮಾಳವ ಮಾಡಿದರೆ ತಾಯ ಹೆಸರಾಯಿತ್ತಲ್ಲದೆ . ತಂದೆಯ ಹೆಸರಿಲ್ಲಾ, ಕೂಡಲಸಂಗಮದೇವಾ!