ಬಸವಣ್ಣ   
  ವಚನ - 228     
 
ಹರಸಿ ಮಾಡುವುದು ಹರಕೆಯ ದಂಡ, ನೆರಹಿ ಮಾಡುವುದು ಡಂಭಿನ ಭಕ್ತಿ. ಹರಸಬೇಡ, ನೆರಹಬೇಡ ಬಂದ ಭರವನರಿದರೆ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ.