ಬಸವಣ್ಣ   
  ವಚನ - 238     
 
ಸತ್ಯವುಳ್ಳ ಭಂಡವ ತುಂಬುವುದಯ್ಯಾ! ಸಯಿಧಾನ, ಸಯಿಧಾನವಯ್ಯಾ: ಮನ ಧಾರೆವಟ್ಟಲು! ಕೂಡಲಸಂಗನ ಶರಣರು ಹಿಡಿಯದ ಭಂಡವನು ಆರಾದೊಡಾಗಲಿ ಹೋಗಲೀಯರಯ್ಯಾ.