ಬಸವಣ್ಣ   
  ವಚನ - 260     
 
ಕುದುರನೇಸು ತೊಳೆದರೆಯೂ ಕೆಸರು ಮಾಣ್ಬುದೆ? ಎನ್ನ ಕಾಯದೊಳುಳ್ಳ ಅವಗುಣಂಗಳ ಕಳೆದು ಕೃಪೆಯ ಮಾಡಯ್ಯಾ. ಕಂಬಳಿಯಲ್ಲಿ ಕಣಕವ ನಾದಿದಂತೆ, ಕಾಣರೇ ಎನ್ನ ಮನ! ಕೂಡಲಸಂಗಮದೇವಾ, ನಿಮಗೆ ಶರಣೆಂದು ಶುದ್ಧ, ಕಾಣಯ್ಯಾ.