ಬಸವಣ್ಣ   
  ವಚನ - 276     
 
ಕೋ[ಟ್ಯ]ನುಕೋಟಿ ಜಪವನು ಮಾಡಿ ಕೋಟಲೆಗೊಳ್ಳಲದೇಕೆ ಮನವೇ? ಕಿಂಚಿತು ಗೀತವೊಂದನಂತಕೋಟಿ ಜಪ! ಜಪವೆಂಬುದೇಕೆ, ಮನವೇ? ಕೂಡಲಸಂಗನ ಶರಣರ ಕಂಡು, ಆಡಿ ಹಾಡಿ ಬದುಕು ಮನವೇ.