ಬಸವಣ್ಣ   
  ವಚನ - 278     
 
ಸುರರ ಬೇಡಿದಡಿಲ್ಲ, ನರರ ಬೇಡಿದಡಿಲ್ಲ, ಬರಿದೆ ಧೃತಿಗೆಡಬೇಡ, ಮನವೇ; ಆರನಾದಡೆಯೂ ಬೇಡಿ ಬೇಡಿ ಬರಿದೆ ಧೃತಿಗೆಡಬೇಡ ಮನವೇ. ಕೂಡಲಸಂಗಮದೇವನಲ್ಲದೆ, ಆರ ಬೇಡಿದಡಿಲ್ಲ, ಮನವೇ.