ಬಸವಣ್ಣ   
  ವಚನ - 282     
 
ಲೋಕೋಪಚಾರಕ್ಕೆ ಮಜ್ಜನಕ್ಕೆರೆವೆನಯ್ಯಾ: ಮನದ ತಾಮಸ ಬಿಡದು, ಮನವ ಕಪಟ ಬಿಡದಯ್ಯಾ; ʼಶಿವಶರಣೆಂಬುದುʼ ಒಪ್ಪಚಿಯಳವಡದಯ್ಯಾ! ಎನ್ನ ಮನದಲ್ಲಿ ಎರಡುಳ್ಳನ್ನಕ್ಕ ಕೂಡಲಸಂಗಮದೇವರೆಂತೊಲಿವ?