ಬಸವಣ್ಣ   
  ವಚನ - 286     
 
ಲಿಂಗದಲ್ಲಿ ಕಠಿಣವುಂಟೆ? ಜಂಗಮದಲ್ಲಿ ಕುಲವುಂಟೆ? ಪ್ರಸಾದದಲ್ಲಿ ಅನುರುಚಿಯುಂಟೆ? ಈ ತ್ರಿವಿಧದಲ್ಲಿ ಭಾವಭೇದವನರಸುವೆನು, ಕೂಡಲಸಂಗಮದೇವಾ, ಧಾರೆವಟ್ಟಲೆನ್ನ ಭಕ್ತಿ.