ಬಸವಣ್ಣ   
  ವಚನ - 288     
 
ಓತಿ ಬೇಲಿವರಿದಂತೆ ಎನ್ನ ಮನವಯ್ಯಾ, ಹೊತ್ತಿಗೊಂದು ಪರಿಯಪ್ಪ ಗೋಸುಂಬೆಯಂತೆನ್ನ ಮನವು; ಬಾವುಲ ಬಾಳುವೆಯಂತೆನ್ನ ಮನವು! ನಡುವಿರುಳೊಳೆದ್ದ ಕುರುಡಂಗೆ ಆಗಸೆಯಲ್ಲಿ ಬೆಳಗಾದಂತೆ ನಾನಿಲ್ಲದ ಭಕ್ತಿಯ ಬಯಸಿದರುಂಟೆ, ಕೂಡಲಸಂಗಮದೇವಾ?