ಬಸವಣ್ಣ   
  ವಚನ - 293     
 
ಉಡುವಿನ ಭಾವದಲ್ಲಿ ಹಡೆದರೆಮ್ಮವರು; ಊಸರವಳ್ಳಿಯಂತೆ ಎನ್ನಿರವು- ಬಾವುಲ ಬಾಳುವೆಯ ತೆರನಂತೆ! ಹೊತ್ತಾರೆ ಎದ್ದ ಕುರುಡಂಗೆ ಆಗಸೆಯಲ್ಲಿ ಅಸ್ತಮಾನವಾದಂತೆ; ಆನು ಭಕ್ತಿಯ ಬಯಸಿದರಹುದೆ ಕೂಡಲಸಂಗಮದೇವಾ?