ಬಸವಣ್ಣ   
  ವಚನ - 296     
 
ಕಾಣಿಯ ಲೋಭ ಕೋಟಿಯ ಲಾಭವ ಕೆಡಿಸಿದುದ ನಾನರಿಯೆನಯ್ಯಾ. ಭಕ್ತಿಯ ಕುಳವ ನಾನರಿಯದೆ ಮತಿಗೆಟ್ಟ ಪರಿಯ ನೋಡಯ್ಯಾ. ಕೂಡಲಸಂಗನ ಶರಣರ ಸಂಗದಿಂದಲರಿದರೆ ನಾನು ಬದುಕುವೆನಯ್ಯಾ.