ಬಸವಣ್ಣ   
  ವಚನ - 299     
 
ಶಬ್ದಸುಖಕ್ಕೆ ಮಚ್ಚಿ, ಮಾತಿಂಗೆ ಮಾತನೆ ಕೊಟ್ಟು ಕೆಟ್ಟೆನಯ್ಯಾ ; ಅನುಭಾವ ಅಕ್ಕವೆಯಾಗದೆ, ಬೆಬ್ಬನೆ ಬೆರೆತೆನಯ್ಯಾ ! ಅಮೃತದ ಕೊಡನ ತುಂಬಿ ಒಡೆಯೆ ಹೊಯ್ದು ಅರಸಲುಂಟೆ? ಸ್ವಾಮಿ-ಭೃತ್ಯಸಂಬಂಧವೆ ಎನ್ನ ಭಕ್ತಿ: ಪ್ರತ್ಯುತ್ತರ ನಾಯಕನರಕ, ಕೂಡಲಸಂಗಮದೇವಾ.