ಬಸವಣ್ಣ   
  ವಚನ - 312     
 
ಆನು ನಿಮ್ಮ ಭಕ್ತಿಯಲ್ಲಿ ದರದುರನೆಂಬೆ. ದಿಟಕ್ಕೆ ಬಂದರೆ ಕಾಣದಂತಡ್ಡ ಮೊಗವಿಕ್ಕುವೆ ಗರುಡಂಗೆ ಘಟಸರ್ಪನ ತೋರುವಂತೆ ! ಶಿವಶರಣರೆಂದರೆ ಕಿವಿಗೇಳದಂತಿಹೆನು; ಮನಕ್ಕೆ ಮನವೇ ಸಾಕ್ಷಿಯಯ್ಯಾ, ಕೂಡಲಸಂಗಮದೇವಾ.