ಬಸವಣ್ಣ   
  ವಚನ - 316     
 
ಕಾಣುತ್ತ ಕಡೆಗಣಿಸಿ, ಕೆಡಿಸಿ ಅರಸುವ ಮತಿಭ್ರಷ್ಟ ನಾನು, ಲಿಂಗಯ್ಯಾ! ತನುಲೋಭ, ಮನಲೋಭ, ಧನಲೋಭ ಮುಂದುಗೆಡಿಸಿ ಕಾಡಿಹುವೆನ್ನಾ. ತನು-ಮನ-ಧನವ ನಿವೇದಿಸಿದವರ ಮನೆಯ ಮಗ ನಾನಯ್ಯಾ, ಕೂಡಲಸಂಗಮದೇವಾ.