ಬಸವಣ್ಣ   
  ವಚನ - 319     
 
ಮಾತಿನಲ್ಲಿ ಶ್ರೋತ್ರಸುಖವ ನುಡಿಯಬಹುದಲ್ಲದೆ, ಮಾಡುವ ಸತ್ಕ್ರಿಯೆಯಿಂದ ಭಕ್ತನೆನಿಸಬಾರದು; ಅರ್ಥಪ್ರಾಣಾಭಿಮಾನವಾರಿಗೆಯೂ ಸಮನಿಸದು, ಲಿಂಗಮುಖದಲ್ಲುದಯವಾದ ಶರಣಂಗಲ್ಲದೆ, ಅಯ್ಯಾ. ಕೂಡಲಸಂಗನ ಶರಣರ ಭಕ್ತಿಭಾಂಡಾರವು ಎನಗೆಂತು ಸಾಧ್ಯವಪ್ಪುದು? ಹೇಳೆನ್ನ ತಂದೇ.