ಬಸವಣ್ಣ   
  ವಚನ - 322     
 
ತ್ರಿವಿಧ ತ್ರಿವಿಧದಲ್ಲಿ ತಪ್ಪಿದ ತಪ್ಪುಕ ನಾನಯ್ಯಾ; ಒಮ್ಮಿಂಗೆ ಕರುಣಿಸಯ್ಯಾ, ಒಮ್ಮಿಂಗೆ ಕರುಣಿಸಯ್ಯಾ! ಇದನರಿದು ಇನ್ನು ತಪ್ಪಿದೆನಾದರೆ ನೀ ಮಾಡಿತ್ತೆ ಸಲುವುದು, ಕೂಡಲಸಂಗಮದೇವಾ.