ಬಸವಣ್ಣ   
  ವಚನ - 327     
 
ತತ್ತ್ವ ವನರಿದೆನೆಂದು ಮೃತ್ಯುವ ಕರಕೊಂಡೆನಯ್ಯಾ, ನಾನೆತ್ತ ಬಲ್ಲೆ ನಿಮ್ಮ ಶರಣರಂತುವನು? ನಾನೆತ್ತ ಬಲ್ಲೆ ನಿಮ್ಮ ಪ್ರಮಥರಂತುವನು? ಸರ್ವಾಪರಾಧಿಯಾನು; ಎನ್ನ ಮನದ ಕೊನೆಯ ಸೂತಕ ಹಿಂಗದು, ಕೂಡಲಸಂಗಮದೇವಾ.