ಬಸವಣ್ಣ   
  ವಚನ - 348     
 
ಹರನು ಮೂಲಿಗನಾಗಿ, ಪುರಾತರೊಳಗಾಗಿ, ಬಳಿ ಬಳಿಯಲು ಬಂದ ಮಾದಾರನ ಮಗ ನಾನಯ್ಯಾ. ಕಳೆದ ಹೊಲೆಯನೆಮ್ಮಯ್ಯ, ಜಾತಿಸೂತಕ! ಮಾದಾರನ ಮಗ ನಾನಯ್ಯಾ, ಪನ್ನಗಭೂಷಣ ಕೂಡಲಸಂಗಯ್ಯಾ, ಚೆನ್ನಯ್ಯನೆನ್ನ ಮುತ್ತಯ್ಯನಜ್ಜನಪ್ಪನಯ್ಯಾ!!