ಬಸವಣ್ಣ   
  ವಚನ - 362     
 
ಕಾಗೆ ವಿಷ್ಟಿಸುವ ಹೊನ್ನ ಕಳಸವಹುದರಿಂದ ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯಾ: ಅಯ್ಯಾ ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯಾ! 'ಕರ್ಮಾವಲಂಬನಃ ಕೇಚಿತ್| ಕೇಚಿತ್ ಜ್ಞಾನಾವಲಂಬನಂ ವಯಂ ತು ಶಿವಭಕ್ತಾನಾಂ| ಪಾದುಕಸ್ಯಾವಲಂಬನಂ' ಕೂಡಲಸಂಗಮದೇವಾ, ನಿಮ್ಮ ಸೆರಗೊಡ್ಡಿ ಬೇಡು[ವಿ]ದೊಂದೇ ವರವ ಕರುಣಿಸಯ್ಯಾ.