ಬಸವಣ್ಣ   
  ವಚನ - 375     
 
ಗಿಳಿಯ ಹಂಜರವಿಕ್ಕಿ, ಸೊಡರಿಂಗೆಣ್ಣೆಯನೆರೆದು, ಬತ್ತಿಯನಿಕ್ಕಿ ಬರವ ಹಾರುತ್ತಿದ್ದೆನೆಲಗವ್ವಾ. ತರಗೆಲೆ ಗಿರಕೆಂದಡೆ ಹೊರಗನಾಲಿಸುವೆ: ಅಗಲಿದೆನೆಂದೆನ್ನ ಮನ ಧಿಗಿಲೆಂದಿತ್ತೆಲೆಗವ್ವಾ! ಕೂಡಲಸಂಗನ ಶರಣರು ಬಂದು, ಬಾಗಿಲ ಮುಂದೆ ನಿಂದು `ಶಿವಾ' ಎಂದರೆ, ಸಂತೋಷಪಟ್ಟೆನೆಲಗವ್ವಾ!