ಬಸವಣ್ಣ   
  ವಚನ - 376     
 
ಅಡವಿಯಲೊಬ್ಬ ಕಡು ನೀರಡಿಸಿ, ಎಡೆಯಲ್ಲಿ ನೀರಕಂಡಂತಾಯಿತ್ತಯ್ಯಾ! ಕುರುಡ ಕಣ್ಣ ಪಡೆದಂತೆ, ಬಡವ ನಿಧಾನವ ಕಂಡಂತಾಯಿತ್ತಯ್ಯಾ! ನಮ್ಮ ಕೂಡಲಸಂಗನ ಶರಣರ ಬರವೆನ್ನ ಪ್ರಾಣ, ಕಂಡಯ್ಯಾ!