ಬಸವಣ್ಣ   
  ವಚನ - 378     
 
ಸಾಸವೆಯ ಮೇಲೆ ಸಾಗರವರಿದಂತಾಯಿತ್ತಯ್ಯಾ; ಆನಂದದಿಂದ ನಲಿನಲಿದಾಡುವೆ. ಆನಂದದಿಂದ ಕುಣಿಕುಣಿದಾಡುವೆ: ಕೂಡಲಸಂಗನ ಶರಣರು ಬಂದರೆ, ಉಬ್ಬಿ, ಕೊಬ್ಬಿ, ಹರುಷದಲೋಲಾಡುವೆ!