ಬಸವಣ್ಣ   
  ವಚನ - 381     
 
ಆವಿಗೆಯಲೊದಗಿದ ಕರ್ಪಿನಂತೆ, ಅಮೃತದೊಳಗಿರ್ದ ಸರ್ಪನ ತನುವಿನಂತೆ, ಇರ್ದೆನಯ್ಯಾ ನಾನು, ಹೊರಗೆ ನುಂಪಾಗಿ! ಸಿಂಗಕ್ಕೊಲಿದ ಮದಕರಿಯಂತೆ ಆನು ಜಂಗಮಕ್ಕೊಲಿದೆನಯ್ಯಾ, ಕೂಡಲಸಂಗಮದೇವಾ.