ಬಸವಣ್ಣ   
  ವಚನ - 386     
 
ಎನ್ನಲ್ಲಿ ಭಕ್ತಿ ಸಾಸವೆಯ ಷಡ್ಭಾಗದನಿತಿಲ್ಲ: ಎನ್ನ ಭಕ್ತನೆಂಬರು, ಎನ್ನ ಸಮಯಾಚಾರಿಯೆಂಬರು! ನಾನೇನು ಪಾಪವ ಮಾಡಿದೆನೊ: ಬೆಳೆಯದ ಮುನ್ನವೆ ಕೊಯ್ವರೆ? ಹೇಳಾ ಅಯ್ಯಾ! ಇರಿಯದ ವೀರ, ಇಲ್ಲದ ಸೊಬಗವ ಎಲ್ಲಾ ಒಡೆಯರು ಏರಿಸಿ ನುಡಿವರು! ಎನಗಿದು ವಿಧಿಯೆ, ಕೂಡಲಸಂಗಮದೇವಾ?