ಬಸವಣ್ಣ   
  ವಚನ - 388     
 
ಎನ್ನವರೆನಗೊಲಿದು ಹೊನ್ನಶೂಲವನಿಕ್ಕಿದರಯ್ಯಾ. ಅಹಂಕಾರಪೂರಾಯ ಘಾಯದಲ್ಲಿ ಆನೆಂತು ಬದುಕುವೆನೆಂತು ಜೀವಿಸುವೆ? ಜಂಗಮವಾಗಿ ಬಂದು ಜರೆದು, ಶೂಲವನಿಳುಹಿ, ಪ್ರಸಾದದ ಮದ್ದನಿಕ್ಕಿ, ಸಲಹು ಕೂಡಲಸಂಗಮದೇವಾ.