ಬಸವಣ್ಣ   
  ವಚನ - 391     
 
ನಾನಾಸ್ಥಾನಂಗಳಲ್ಲಿ ಬಂದು ಕುಳ್ಳಿರ್ದುದು ತೆರಳುವುದೆ, ಅಯ್ಯಾ: ಉಭಯಕುಳಕ್ಕಲ್ಲದೆ ತೆರಳದು. ಬೀದಿಯಲ್ಲಿ ಬಿದ್ದ ಶಿಶುವನು ಹೆತ್ತ ತಾಯಿ ಹತ್ತಿರ ಬಂದು ಎತ್ತುವಂತೆ! ಎನ್ನನಾರು ಜನ್ಮಕ್ಕೆ ತಂದು ಅಘೋರನರಕದಲ್ಲಿಕ್ಕಿದುದ ನಾ ಬಲ್ಲೆ: ಕೂಡಲಸಂಗಮದೇವಾ ನಿಮ್ಮ ಹಂಗೇನು? ಹರಿಯೇನು? ಅನುಭವ ಲಿಂಗಜಂಗಮದ ಮರೆಹೊಕ್ಕು ಬದುಕಿದೆನು.