ಬಸವಣ್ಣ   
  ವಚನ - 402     
 
ಲಾಂಛನವ ಕಂಡು ನಂಬುವೆ: ಅವರಂತರಂಗವ ನೀನೇ ಬಲ್ಲೆ! ತೊತ್ತಿಂಗೆ ತೊತ್ತುಗೆಲಸವಲ್ಲದೆ, ಅರಸರ ಸುದ್ದಿ ಎನಗೇಕಯ್ಯಾ? ರತ್ನಮೌಕ್ತಿಕದಚ್ಚು, ಕೂಡಲಸಂಗಮದೇವಾ ನಿಮ್ಮ ಶರಣರು.