ಬಸವಣ್ಣ   
  ವಚನ - 403     
 
ಆರಾರ ಮನದಲ್ಲಿ ಏನೇನಿಹುದೆಂದರಿಯೆ: ಒಳ್ಳಿಹರೆಂದೆನಲಮ್ಮೆ; ಹೊಲ್ಲಹರೆಂದೆನಲಮ್ಮೆ! ಶಿವಭಕ್ತರಾದ ಕಾರಣ, ಜಂಗಮವೇ ಲಿಂಗ, ಕೂಡಲಸಂಗಮದೇವಾ.