ಬಸವಣ್ಣ   
  ವಚನ - 410     
 
ಬಂಜೆ ಬೇನೆಯನರಿಯದಂತೆ ಒಬ್ಬರೊಂದ ನುಡಿವಿರಿ, ಕೇಳಿರಯ್ಯಾ. ಎನ್ನಾಯುಷ್ಯ ಭವಿಷ್ಯ ಎನ್ನಾ ಭಕ್ತರು, ಕಂಡಯ್ಯಾ; ಎನ್ನಾಯುಷ್ಯ ಭವಿಷ್ಯ, ಎನ್ನಾ ಪ್ರಮಥರು ಕಂಡಯ್ಯಾ! ಕೂಡಲಸಂಗನ ಶರಣರು ಮುಖಲಿಂಗಿಗಳಯ್ಯಾ.