ಬಸವಣ್ಣ   
  ವಚನ - 412     
 
ಉಟ್ಟು-ತೊಟ್ಟು ಪೂಜ್ಯನಾಗಿ ಬಂದ ಜಂಗಮ ವಿಶೇಷವೆಂದು, ಕಂತೆ-ಬೊಂತೆಯ ಜಂಗಮ ಬಂದರೆ ಹೀನವೆಂದು ಕಂಡೆನಾದರೆ ಪಂಚಮಹಾಪಾತಕ! ಇದು ಕಾರಣ, ಅನ್ನ-ವಸ್ತ್ರ-ಧನಮಾಟದಲ್ಲಿ ಎರಡಾಗಿ ಕಂಡೆನಾದರೆ ನರಕದಲ್ಲಿಕ್ಕುವ, ಕೂಡಲಸಂಗಮದೇವ.