ಬಸವಣ್ಣ   
  ವಚನ - 414     
 
ಕುದುರೆ- ಸತ್ತಿಗೆಯವರ ಕಂಡರೆ ಹೊರಳಿಬಿದ್ದು ಕಾಲಹಿಡಿವರು! ಬಡಭಕ್ತರು ಬಂದರೆ `ಎಡೆಯಿಲ್ಲ, ಅತ್ತ ಸನ್ನಿ' ಎಂಬರು: ಎನ್ನೊಡೆಯ ಕೂಡಲಸಂಗಯ್ಯನವರ ತಡಗೆಡಹಿ ಮೂಗ ಕೊಯ್ಯದೆ ಮಾಣ್ಬನೆ;