ಬಸವಣ್ಣ   
  ವಚನ - 424     
 
ಲಿಂಗವ ಪೂಜೆಯ ಮಾಡಿ, ಜಂಗಮವ ಕಂಡುದಾಸೀನವ ಮಾಡಿದರೆ, ಆ ಲಿಂಗಪೂಜಕರಿಗೆ ಮಾಡಿದ ಶಿವದೂತರ ದಂಡವೆಂಬುದು! ಲೋಕದ ಕರ್ಮಿಗಳಿಗೆ ಮಾಡಿದ ಯಮದೂತರ ದಂಡವೆಂಬುದು! ಇದು ಕಾರಣ, ಲಿಂಗ ಜಂಗಮವನೊಂದೆಂದರಿಯದವರ ಎನಗೆ ತೋರದಿರಯ್ಯಾ, ಕೂಡಲಸಂಗಮದೇವಾ.