ಬಸವಣ್ಣ   
  ವಚನ - 426     
 
ಅರಸನ ಕಂಡು ತನ್ನ ಪುರುಷನ ಮರೆದರೆ ಮರನೇರಿ ಕೈಬಿಟ್ಟಂತಾಯಿತ್ತಯ್ಯಾ! ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ, ನಮ್ಮ ಕೂಡಲಸಂಗಮದೇವ ಜಂಗಮ ಮುಖಲಿಂಗವಾದ ಕಾರಣ.