ಬಸವಣ್ಣ   
  ವಚನ - 449     
 
ಒಡೆಯರು ಬಂದರೆ ಗುಡಿ ತೋರಣವ ಕಟ್ಟಿ; ನಂಟರು ಬಂದರೆ ಸಮಯವಿಲ್ಲೆನ್ನಿ! ಅಂದೇಕೆ ಬಾರರು ನೀರಿಂಗೆ ನೇಣಿಂಗೆ ಹೊರಗಾದಂದು? ಸಮಯಾಚಾರಕ್ಕೊಳಗಾದಂದು? ಪರುಷ ಮುಟ್ಟಲು ಕಬ್ಬುಣ ಸುವರ್ಣವಾಯಿತ್ತು: ಬಳಿಕ ಬಂಧುಗಳುಂಟೆ, ಕೂಡಲಸಂಗಮದೇವಾ?