ಬಸವಣ್ಣ   
  ವಚನ - 458     
 
ಭವವಿರಹಿತ ಭಕ್ತನಾದ ಬಳಿಕ, ಭಕ್ತಿಭಾಜನದಲ್ಲಿ ಮಾಡಿ ಭವಿಗಿಕ್ಕಲಾಗದಯ್ಯಾ: ಯುಕ್ತಿಶೂನ್ಯರಿಗೆ ಮುಂದೆ ಪ್ರಸಾದ ದೂರ! ಮುಕ್ತಿಯಿಲ್ಲ.ಮುಂದೆ ನಾಯ ಬಸುರಲ್ಲಿ ಬಪ್ಪುದು ತಪ್ಪದು ಪೃಥ್ವಿಯೊಳಗೆ! ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದೆ, ಅನಾಚಾರಕ್ಕೆಲ್ಲಿಯದೋ?