ಬಸವಣ್ಣ   
  ವಚನ - 470     
 
ಪಾತಕ ಮಹಾಪಾತಕವ ಮಾಡಿದವನು ಸದ್ಭಕ್ತರ ಮನೆಗೆ ಹೋಗಿ, ಅವರೊಕ್ಕ ಪ್ರಸಾದವನಾಯ್ದುಂಡರೆ, ಸಕಲ ಬ್ರಹ್ಮಹತ್ಯಾದಿ ಪಾತಕ ಪರಿಹಾರವು, ಒಮ್ಮೆ ಬೇಡಿಕೊಂಡುಂಡರೆ, 'ಪಾತಕೇ ಸಮನ:ಪ್ರಾಪ್ತೇ| ಶಿವಭಕ್ತಗೃಹಂ ವ್ರಜೇತ್ ಯಾಚಯೇದನ್ನಮಮೃತಂ| ತದಲಾಭೇ ಜಲಂ ಪಿಬೇತ್' ಇದು ಕಾರಣ, ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರಿಗೆ ʼನಮೋ ನಮಃʼ ಎಂಬೆನು.