ಬಸವಣ್ಣ   
  ವಚನ - 472     
 
ಭವಭವದಲ್ಲಿ ನಿಮ್ಮ ಜಂಗಮವೆ ಶರಣಯ್ಯಾ: ಅವರುಂಡು ಮಿಕ್ಕುದ ಉಡುಗಿ, ಒಕ್ಕು ಪ್ರಸಾದವನಾಯ್ದುಂಬ ಮರುಳ ನಾನಯ್ಯಾ. ನಮ್ಮ ಕೂಡಲಸಂಗನ ಶರಣರ ರಿಣವ ನಾ ಹಿಂಗಲಾರೆ!