ಬಸವಣ್ಣ   
  ವಚನ - 473     
 
ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ: ಅವರೊಕ್ಕುದನುಂಡು, ಮಿಕ್ಕುದ ಕಾಯ್ದುಕೊಂಡಿಪ್ಪ ಕಾರಣ ಕಾಲ ಮುಟ್ಟಲಮ್ಮವು; ಕಲ್ಪಿತ ತೊಡೆಯಿತ್ತು; ಎನ್ನ ಭವಬಂಧನ ಹಿಂಗಿತ್ತು; ಕರ್ಮ ನಿರ್ಮಳವಾಯಿತ್ತು! ಅವರ ತೊತ್ತಿನ ತೊತ್ತಿನ ಮರುದೊತ್ತಿನ ಮಗನೆಂದು ಕೂಡಲಸಂಗಮದೇವ `ಇತ್ತ ಬಾ' ಎಂದೆತ್ತಿಕೊಂಡನು!