ಬಸವಣ್ಣ   
  ವಚನ - 483     
 
ಎನ್ನ ಜನ್ಮವ ತೊಡೆದ ನೀ ಧರ್ಮಿ, ಎನ್ನ ಜನ್ಮವನತಿಗಳೆದ ನೀಧರ್ಮಿ. ಎನ್ನ ಭವಬಂಧನವ ನಿಕರಿಸಿದೆಯಾಗಿ, ಶಿವನೇ ಗತಿಮತಿಯೆಂದು ನಂಬಿದೆನಯ್ಯಾ. ಎನ್ನ ಅಷ್ಟಮದಂಗಳ ಸುಟ್ಟುರುಹಿದೆಯಾಗಿ, ಕಟ್ಟುಗ್ರದಿಂದ ನಿಮ್ಮ ಶ್ರೀಚರಣವ ಕಂಡೆ: ಸೃಷ್ಟಿಪ್ರತಿಪಾಲಕಾ, ನಿಮ್ಮ ನಂಬಿದೆ, ಕರುಣಿಸು, ಕೂಡಲಸಂಗಮದೇವಾ.