ಬಸವಣ್ಣ   
  ವಚನ - 484     
 
ಭವರೋಗವೈದ್ಯನೆಂದು ನಾ ನಿಮ್ಮ ಮರೆಹೊಕ್ಕೆ, ಭಕ್ತಿದಾಯಕ ನೀ ಕರುಣಿಸು ಲಿಂಗತಂದೇ! ಜಯಜಯ ಶ್ರೀ ಮಹಾದೇವ, ಜಯಜಯ ಶ್ರೀ ಮಹಾದೇವ, ಜಯಜಯ ಶ್ರೀ ಮಹಾದೇವ, ಎನ್ನುತ್ತಿದ್ದಿತೆನ್ನ ಮನವು. ಕೂಡಲಸಂಗಮದೇವಂಗೆ ಶರಣೆಂದಿತ್ತೆನ್ನ ಮನವು!