ಬಸವಣ್ಣ   
  ವಚನ - 506     
 
ನೀನೊಲಿಯಿತ್ತೇ ಪುಣ್ಯ, ನೀನೊಲ್ಲದುದೇ ಪಾಪ, ಕಂಡಯ್ಯಾ. ಸಕಲ ಜಗದೊಳಗೆ ಅನುಶ್ರುತನಾಗಿಪ್ಪೆಯಯ್ಯಾ. ನೀನೊಲಿದವನೇ ನಿಮ್ಮನರಿವನು: 'ಪ್ರಸಾದಾದ್ದೇವತಾಭಕ್ತಿಃ| ಪ್ರಸಾದೋ ಭಕ್ತಿಸಂಭವಃ ಯಥಾಂಕುರತೋವಾ ಬೀಜಂ ಬೀಜತೋವಾ ಯಥಾಂಕುರಂ.ʼ ನೀನೊಲಿದವನೆ ಧನ್ಯ, ಜಗಕ್ಕೆ ಪಾವನ ಕೂಡಲಸಂಗಮದೇವಾ.