ಬಸವಣ್ಣ   
  ವಚನ - 507     
 
ಅಷ್ಟವಿಧಾರ್ಚನೆ ಷೋಡಶೋಪಚಾರವ, ಅಂದಂದಿನ ಕೃತ್ಯವನಂದಂದಿಗೆ ಆನು ಮಾಡಿ ಶುದ್ಧನಯ್ಯಾ! ಹಂಗು ಹರಿಯಿಲ್ಲದ ಕಾರಣ, ಕೂಡಲಸಂಗಮದೇವ ನಿಷ್ಫಲದಾಯಕನಾಗಿ, ಆನು ಮಾಡಿ ಶುದ್ಧನಯ್ಯಾ!