ಬಸವಣ್ಣ   
  ವಚನ - 518     
 
ಕಾಳಿದಾಸಂಗೆ ಕಣ್ಣನಿತ್ತೆ, ಓಹಿಲಯ್ಯನ ನಿಜಪುರಕ್ಕೊಯ್ದೆ: ನಂಬಿ ಕರೆದೋಡೋ ಎಂದೆ, ತೆಲುಗು ಜೊಮ್ಮಯ್ಯಂಗೆ ಒಲಿದೆ, ದೇವಾ, ಕೂಡಲಸಂಗಮದೇವಾ, ಎನ್ನನೇಕೆ ಒಲ್ಲೆಯಯ್ಯಾ?