ಬಸವಣ್ಣ   
  ವಚನ - 520     
 
ಕಣ್ಣ ಕೋಪಕ್ಕೆ ಮುಂದರಿಯದೆ ನುಡಿದೆ! ಮನಮೆಚ್ಚಿ ಮರುಳಾದೆ, ನೋಡವ್ವಾ ! ಕೇಳು, ಕೇಳವ್ವಾ ,ಕೆಳದೀ, ಸಖಿಯರಿಲ್ಲದೆ ಸುಖವ ಬಯಸುವರುಂಟೆ? ಹೇಳಾ. ಎನ್ನ ಮುನಿಸು ಎನ್ನಲ್ಲಿಯೆ ಅಡಗಿತ್ತು; ಇನ್ನು ಬಾರಯ್ಯಾ, ಕೂಡಲಸಂಗಮದೇವಾ.