ಬಸವಣ್ಣ   
  ವಚನ - 522     
 
ಮಾಡುವ ಭಕ್ತನ ಕಾಯ ಬಾಳೆಯ ಕಂಭದಂತಿರಬೇಕು: ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದರೆ ಒಳಗೆ ಕೆಚ್ಚಿಲ್ಲದಿರಬೇಕು. ಮೇಲಾದ ಫಲವ ನಮ್ಮವರು ಬೀಜಸಹಿತ ನುಂಗಿದರು; ಎನಗಿನ್ನಾವ ಭವವಿಲ್ಲ, ಕಾಣಾ, ಕೂಡಲಸಂಗಮದೇವಾ.