ಬಸವಣ್ಣ   
  ವಚನ - 529     
 
ಉಪ್ಪರಗುಡಿ, ನಂದಿವಾಹನ ಸದ್ಯೋಜಾತನ ಬಾಗಿಲ ಮುಂದೆ ಸಾರುತ್ತೈದಾವೆ, ನೋಡಾ: ಶ್ರುತಿಗಳು ನಾಲ್ಕು ವೇದವೂ ಹುಸಿಯದೆ `ಭರ್ಗೋದೇವಸ್ಯ ಧೀಮಹಿ' ಎಂದುದಾಗಿ, ಕೂಡಲಸಂಗಮನಲ್ಲದಿಲ್ಲೆಂದುದು ವೇದ.