ಬಸವಣ್ಣ   
  ವಚನ - 534     
 
ಜಲಕೂರ್ಮನಾಗಮೇದಿನಿ ಸಪ್ತಸಾಗರ ಅಜಾಂಡಭಾಂಡ ಹರಿವಿರಂಚಿಗಳು ನಿಮ್ಮ ಉದರದ ಕೊನೆಯ ಪ್ರಾಣಿಗಳಯ್ಯಾ! ಕೂಡಲಸಂಗನ ಮಹಾಮನೆಯಲು ಅಸ್ತಿ ಗ್ರಾಹಕನೆಂಬ ಗಣೇಶ್ವರನ ಇಚ್ಛಾಮಾತ್ರದಿಂದ ಜಗಜುಗವಯ್ಯಾ?