ಬಸವಣ್ಣ   
  ವಚನ - 538     
 
ಹರನ ಕೊರಳಲ್ಲಿಪ್ಪ ಕರೋಟಿಮಾಲೆಯ ಶಿರದ ಲಿಖಿತವ ಕಂಡು, ಮರುಳತಂಡಗಳು ಓದಿ ನೋಡಲು, ʼಇವನಜ, ಇವ ಹರಿ ಇವ ಸುರಪತಿ, ಇವ ಧರಣೀಂದ್ರನಿವನಂತಕʼನೆಂದು ಹರುಷದಿಂದ ಸರಸವಾಡಿತ್ತ ಕಂಡು, ಹರ ಮುಕುಳಿತನಾಗಿ ನಸುನಕ್ಕನು, ನಮ್ಮ ಕೂಡಲಸಂಗಮದೇವ.